ನಂಬು ನಂಬೆಲೆ ಮನವೆ

ನಂಬು ನಂಬೆಲೆ ಮನವೆ ನಿನ್ನನು
ನಂಬದಿದ್ದರೆ ನಶ್ವರಾ
ತುಂಬು ಎದೆಯಲಿ ವಿಶ್ವಮೂರ್ತಿಯ
ಇಲ್ಲದೆಲ್ಲವು ಅಪಸ್ವರಾ || ಪ||

ನಂಬಿ ನಿನ್ನನು ಸುಖವ ಕಂಡರು
ತುಂಬು ಹೃದಯದಿ ಶರಣರು
ನಂಬಿ ನಿನ್ನಯ ಹೊಗಳಿ ದಣಿಯದೆ
ಹಾಡಿ ಕುಣಿದರು ದಾಸರು || ೧ ||

ಹುಟ್ಟಿ ಸಾಯುವ ಉಬ್ಬಿ ಇಳಿಯುವ
ದೇಹವಲ್ಲವು ಜೀವನಾ
ಉಂಡು ಮಲಗುವ ತಿಂದು ತೇಗುವ
ಸುಖವು ಅಲ್ಲವು ಸಾಧನಾ || ೨ ||

ಸುಖದ ದುಃಖದ ತೆರೆಗಳಲ್ಲವು
ಬಾಳಸಾಗರದಾಳವು
ಅದರ ಮೇಗಡೆ ತೇಲಿ ಮುಳುಗುವ
ಕಡ್ಡಿ ಕಸ ನೀನಲ್ಲವು || ೩ ||

ಸಾಗರವೆ ನೀ ಬಾಂದಳವೆ ನೀ
ಭೂಮಿ ಸೃಷ್ಟಿಯೆ ನೀನೆಲೈ
ವಿಶ್ವಪೂರ್ಣನು ಸರ್ವಶಕ್ತನು
ವಿಶ್ವದೇವನು ನಿನ್ನಲೈ || ೪ ||

ನಂಬು ನಂಬೆಲೆ ಮನವೆ ನಿನ್ನನು
ನಂಬದಿದ್ದರೆ ನಶ್ವರಾ
ತುಂಬು ಎದೆಯಲಿ ವಿಶ್ವಮೂರ್ತಿಯ
ಇಲ್ಲದೆಲ್ಲವು ಅಪಸ್ವರಾ || ೫ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ರಹ್ಮಚಾರಿ
Next post ಒಂದು ವಿನಂತಿ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys